( 4 Oct, 2015) ರಾಷ್ಟ್ರಕೂಟರು Published By : upscgk.com ರಾಷ್ಟ್ರಕೂಟರು ರಾಷ್ಟ್ರಕೂಟರು ಕ್ರಿ.ಶ. 757 ರಲ್ಲಿ ಬಾದಾಮಿ ಚಾಲುಕ್ಯರನ್ನು ಕೊನೆಗಾಣಿಸಿ ಪ್ರವರ್ಧಮಾನಕ್ಕೆ ಬಂದರು ರಾಷ್ಟ್ರಕೂಟ ಎಂಬ ಪದದ ಅರ್ಥ - ಪ್ರಾದೇಶಿಕ ವಿಭಜನೆಗಳಾದ ರಾಷ್ಟ್ರದ ಮುಖ್ಯಸ್ಥ ರು ಅಥವಾ ರಾಷ್ಟ್ರ ಎಂದರೆ ಪ್ರಾಂತ್ಯ ಹಾಗೂ ಕೂಟ ಎಂದರೆ - ನಾಯಕ ಎಂದರ್ಥ ರಾಷ್ಟ್ರಕೂಟ ಮನೆತನ ಸ್ಥಾಪಕ - ದಂತಿದುರ್ಗ ಇವರ ರಾಜಧಾನಿ - ಮಾನ್ಯಖೇಟ ಮಾನ್ಯಖೇಟ ಪ್ರಸ್ತುತ - ಗುಲ್ಬರ್ಗ ಜಿಲ್ಲೆಯಲ್ಲಿದೆ ಇವರ ರಾಜ್ಯ ಲಾಂಛನ - ಗರುಡ ಇವರು ರಾಜ್ಯಬಾರ ಮಾಡಿದ್ದು - 8 ನೇ ಶತಮಾನದಿಂದ 10 ನೇ ಶತಮಾನದವರೆಗೆ ಆಧಾರಗಳು ದಂತಿದುರ್ಗನ - ಸಮನ್ ಗಡ್ ಹಾಗೂ ಎಲ್ಲೋರದ ಗುಹಾ ಶಾಸನ ಒಂದನೇ ಕೃಷ್ಣನ - ಭಾಂಡ್ಕ ಮತ್ತು ತಾಳೇಗಾಂ ಶಾಸನ ಧೃವನ - ಜೆಟ್ಟಾಯಿ ಶಾಸನ ಅಮೋಘವರ್ಷನ - ಸಂಜಾನ್ ತಾಮ್ರ ಶಾಸನ ಹಾಗೂ ಕವಿ ರಾಜ ಮಾರ್ಗ ಪೊನ್ನನ - ಶಾಂತಿ ಪುರಾಣ ದಂತಿದುರ್ಗನ - ಪಂಚತಂತ್ರ ತ್ರಿವಿಕ್ರಮನ - ನಳಚಂಪು ಪಂಪನ - ವಿಕ್ರಾಮಾರ್ಜುನ ವಿಜಯಂ ಬಿಲ್ಹಣನ - ವಿಕ್ರಮಾಂಕ ದೇವಚರಿತ ಸುಲೇಮಾನ್ ನ - ಬರವಣಿಗೆಗಳು ಹಾಗೂ ಅಲ್ ಮಸೂದಿ ಇಬಾನ್ ಹಾನಲ್ ಮತ್ತು ಇಸ್ತಾಬ್ರಿಯವರ ಬರವಣಿಗೆಗಳು ರಾಷ್ಟ್ರಕೂಟರ ಮೂಲಗಳು ರಟ್ಟ ರಾಷ್ಟ್ರಕೂಟರ ರಾಥೋಡ್ ಮೊದಲಾದವರ ಪದಗಳಲ್ಲಿ ಕಂಡು ಬರುವ ಸಾಮ್ಯದ ಆಧಾರದ ಮೇಲೆ ರಾಷ್ಟ್ರ ಕೂಟರು ರಜಪೂತರ ಮೂಲದವರೆಂದು ಡಾ//.Pleet ರವರ ಆಭಿಪ್ರಾಯ ಉತ್ತರಾರ್ಧದ ಕೆಲವು ಶಾಸನಗಳ ಪ್ರಕಾರ ರಾಷ್ಟ್ರಕೂಟರು ಯಮವಂಶದವರು ಖೇಡ ಮತ್ತು ಮುಲ್ತಾನ್ ತಾಮ್ರ ಶಾಸನದ ಪ್ರಕಾರ ಿವರ ಮೂಲ ನೆಲೆ ಬಿರಾರ್ ನ ಎಲಚಿಪುರ ಬರ್ನೆಲ್ ಮತ್ತು H .Krishna Shastri ರವರ ಪ್ರಕಾರ ಇವರು ಆಂದ್ರ ರೆಡ್ಡಿ ಜನಾಂಗದವರು S.D.C.V ವೈದ್ಯರ ಪ್ರಕಾರ - ಇವರು ಮಹಾರಾಷ್ಟ್ರದವರು ಡಾ//.G.R.Bhoodarkar ರಪ್ರಕಾರ ತುಂಗ ವಂಶದವರು ಹಾಗೂ ತುಂಗ ಮತ್ತ ರಟ್ಟ ಈ ವಂಶದ ಮೂಲ ಪುರುಷರೆಂದು ಕೆಲವು ಶಾಸನ ತಿಳಿಸಿದ . ಅಲ್ತೇಕರ್ ರ ಪ್ರಕಾರ - ರಾಷ್ಟ್ರ ಕೂಟರು ಬಾದಾಮಿ ಚಾಲುಕ್ಯರ ಸಾಮಂತರಾಗಿದ್ದು ಇಂದಿನ ಗುಲ್ಬರ್ಗ ಜಿಲ್ಲೆಯ ಮಾನ್ಯಖೇಟ ಎಂಬಲ್ಲಿ ಒಂದು ಚಿಕ್ಕ ಸಂಸ್ಥಾನವನ್ನು ಆಳುತ್ತಿದ್ದರು ಕನ್ನಡಿಗರು ರಾಷ್ಟ್ರಕೂಟರ ರಾಜಕೀಯ ಇತಿಹಾಸ ಕ್ರಿ.ಶ.757 ರಲ್ಲಿ ಬಾದಾಮಿ ಚಾಲುಕ್ಯರ ಕೊನೆಯ ಅರಸ 2 ನೇ ಕೀರ್ತಿವರ್ಮನನ್ನು ಸೋಲಿಸಿ ದಂತಿದುರ್ಗ ಈ ಸಾಮ್ರಾಜ್ಯಕ್ಕೆ ಅಡಿಪಾಯ ಹಾಕಿದ ದಂತಿದುರ್ಗ - ಈ ಸಾಮ್ರಾಜ್ಯದ ಮೂಲ ಪುರುಷ ದಂತಿದುರ್ಗನ ರಾದಧಾನಿ - ಎಲ್ಲೋರಾ ಈತನ ನಂತರ ಈತನ ಚಿಕ್ಕಪ್ಪ - ಒಂದನೇ ಕೃಷ್ಣ ಅಧಿಕಾರಕ್ಕೆ ಬಂದನು 1 ನೇ ಕೃಷ್ಣ - ಶಿವನ ಆರಾಧಕನಾಗಿದ್ದ . ಇತಿಹಾಸಕ್ಕೆ 1 ನೇ ಕೃಷ್ಣ ಕೊಡುಗೆ - ಎಲ್ಲೋರದ ಕೈಲೈಸನಾಥ ದೇವಾಲಯ ಎಲ್ಲೋರದ ಕೈಲೈಸನಾಥ ದೇವಾಲಯಕ್ಕೆ - ಕನ್ನಕೇಶ್ವರ ಎಂಬ ಹೆಸರಿತ್ತು 1ನೇ ಕೃಷ್ಣ ನಂತರ - ಇಮ್ಮಡಿ ಗೋವಿಂದ ಪಟ್ಟಕ್ಕೆ ಬಂದ ಇಮ್ಮಡಿ ಗೋವಿಂದನ ನಂತರ - ಧೃವನು ಪಟ್ಟಕ್ಕೆ ಬಂದನು ಧೃವ ಈತ ಮೊದಲು ಗಂಗರ ವಿರುದ್ದ ಹೋರಾಡಿ ಅವರ ಗಂಗವಾಡಿ ತನ್ನದಾಗಿಸಿದ ನಂತರ ಕಂಚಿಯ ಪಲ್ಲವ ನಂದಿವರ್ಮನೊಡನೆ ಹೋರಾಡಿ ನಂತರ ವೆಂಗಿ ಚಾಲುಕ್ಯ ಅರಸ 4 ನೇ ವಿಷ್ಣುವರ್ಧನನೊಡನೆ ಕಾದಾಟ ನಡೆಸಿದ ಈತನ ಪತ್ನಿ - ಶೀಲಾಮಹಾದೇವಿ ವೆಂಗಿ ಚಾಲುಕ್ಯ ಮನೆತನದವಳು ಉತ್ತರ ಭಾರತದ ಪ್ರಭುತ್ವಕ್ಕಾಗಿ ನಡೆದ ತ್ರಿರಾಜ ಕದನದಲ್ಲಿ ಸೇರ್ಪಡೆಯಾದ ಮೊದಲು ರಾಷ್ಟ್ರಕೂಟ ದೊರೆ - ಧೃವ ಧೃವನ ನಂತರ ಈತನ ಮಗ - ಮೂರನೇ ಗೋವಿಂದನ ಅಧಿಕಾರಕ್ಕೆ ಬಂದ ಮೂರನೇ ಗೋವಿಂದ ಸ್ತಂಭನ ದಂಗೆಯನ್ನು ಹತ್ತಿಕ್ಕಿದ ಕಂಚಿಯ ಪಲ್ಲವರೊಡನೆ ಧಾಳಿ ನಡೆಸಿದ ವೆಂಗಿಯ ವಿರುದ್ದ ದಾಳಿ ನಡೆಸಿದ ಬಂಗಾಳದ ಧರ್ಮಪಾಲನನ್ನು ಸೋಲಿಸಿದ ಸಂಯುಕ್ತ ಕೂಟದ ವಿರುದ್ದ ಹೋರಾಟ ನಡೆಸಿದ ಮೂರನೇ ಗೋವಿಂದ - ವಾದಿಕ ಮತಾವಲಂಬಿಯಾಗಿದ್ದನು ಲಿಂಗಾನು ಶಾಸನ ಗ್ರಂಥದ ಕರ್ತೃ - ವಾಮನ ವಾಮನನು ಮೂರನೇ ಗೋವಿಂದನ ಆಸ್ಥಾನವನ್ನು “ಜಗತ್ತುಂಗ ಸಭಾ ” ಎಂದು ಕರೆದಿದ್ದಾನೆ ಮೂರನೇ ಗೋವಿಂದನ ಬಿರುದುಗಳು - ಜಗತ್ತುಂಗ , ಕೀರ್ತಿನಾರಾಯಣ . ತ್ರಿಭುವನ ಮಲ್ಲ , ಶ್ರೀವಲ್ಲಭ ಅಮೋಘವರ್ಷ ನೃಪತುಂಗ ಈತ ರಾಷ್ಟ್ರಕೂಟರ ಅತ್ಯಂತ ಪ್ರಸಿದ್ದ ದೊರೆ ಆಧಾರಗಳು ಸಂಜಾನ್ ತಾಮ್ರ ಶಾಸನ ನೀಲಗುಂದ ತಾಮ್ರ ಶಾಸನ ಸಿರೂರು ತಾಮ್ರಪಟ ಶಾಸನ ಕವಿರಾಜ ಮಾರ್ಗ ಬೆಗುಮ್ರ ತಾಮ್ರಪಟ ಶಾಸನ ಸುಲೇಮಾನ್ ನ ಬರವಮಿಗೆಗಳು ಅಮೋಘವರ್ಷನು ಎದುರಿಸಿದ ಸಮಸ್ಸೆಗಳು ವೆಂಗಿಯ ವಿಜಾಯಧಿತ್ಯನು ರಾಷ್ಟ್ರಕೂಟರ ವಿರುದ್ದ ಸಂಚನ್ನು ನಡೆಸಿದನು ಗಂಗರು ಮತ್ತ ಪಲ್ಲವರು ಹಿಂದಿನ ಹಗೆಯನ್ನು ಮುಂದುವರಿಸಿದರು ಗೂರ್ಜರು ಪ್ರತಿಹಾರರು ಗಡಿಯನ್ನು ಆಕ್ರಮಿಸಿದರು ಸಾಮಂತ ಜೆಟ್ಟಿ ಈತನ ವಿರುದ್ದ ದಂಗೆ ಎದ್ದನು ಈತನ ನೆಚ್ಚಿನ ದಂಡ ನಾಯಕ - ಬಂಕೇಶ ಈತ ತನ್ನ ಮಗಳಾದ - ಚಂದ್ರೋಲಬ್ಬೆಯನ್ನು ಗಂಗರ ಬೂತುಗನಿಗೆ ಕೊಟ್ಟು ವಿವಾಹ ಮಾಡಿದನು ಇವನು ಕ್ರಿ.ಶ.800 ರಲ್ಲಿ - ವಿಂಗವಳ್ಳಿಯ ಯುದ್ಧದಲ್ಲಿ ವಿಜಯಾಧಿತ್ಯನನ್ನು ಸಂಪೂರ್ಣವಾಗಿ ಸೋಲಿಸಿದನು ಅಮೋಘವರ್ಷನ ಬಿರುದುಗಳು - ನೀತಿ ನಿರಂತರ , ನೃಪತುಂಗ .ಅತಿಶಯದವಳ , ಲಕ್ಷ್ಮೀವಲ್ಲಭ , ಕೀರ್ತಿ ನಾರಾಯಣ ಇತ್ಯಾದಿ ... ಅಮೋಘವರ್ಷನ ನಿಜವಾದ ಹೆಸರು - ಧೇಯಶರ್ಮ ಅಥವಾ ಶರ್ವ ಅಮೋಘವರ್ಷನ ಆಸ್ಥಾನಕ್ಕೆ ಭೇಟಿನೀಡಿದ ಅರಬ್ ಯಾತ್ರಿಕ - ಸುಲೇಮಾನ್ ಅಮೋಘವರ್ಷನ ಅದಿಕಾರವಧಿಯಲ್ಲಿ ಬರಗಾಲ ಬಂದಿದದ್ದರಿಂದ - ಕೊಲ್ಲಾಪುರದ ಮಹಾಲಕ್ಷ್ಮೀಗೆ ತನ್ನ ಎಡಗೈ ಬೆರಳನ್ನು ಕತ್ತರಿಸಿ ಸಮರ್ಪಿಸಿದ ( ಸಂಜಾನ್ ದತ್ತಿ ಶಾಸನ ) ಕರ್ನಾಟಕದ ಅಶೋಕ - ಅಮೋಘವರ್ಷ ನೃಪತುಂಗ ನೃಪತುಂಗನ ಕನ್ನಡ ಕೃತಿ - ಕವಿರಾಜಮಾರ್ಗ ಅಮೋಘವರ್ಷನೃಪತುಂಗನ ಸಂಸ್ಕೃತ ಕೃತಿ - ಪ್ರಶ್ನೋತ್ತರ ಮಾಲಿಕ ಅಮೋಗವರ್ಷನ ಗುರುಗಳು - ಜಿನಸೇನಾಚಾರ್ಯ ಜಿನಸೇನಾಚಾರ್ಯನ ಕೃತಿಗಳು - ಆದಿಪುರಣ , ಪಾಶ್ಟಾಭ್ಯುದಯ , ಜಯದಳ ಮಾನ್ಯಖೇಟ ಪ್ರಸ್ತುತ - ಹೈದರ್ ಬಾದ್ ಕರ್ನಾಟಕದಲ್ಲಿದೆ ಬಂಕಾಪುರ ನಗರದ ನಿರ್ಮಾತೃ - ಅಮೋಘವರ್ಷನೃಪತುಂಗ ( ತನ್ನ ದಂಡನಾಯಕ ಬಂಕೇಶನ ಜ್ಞಾಪಕಾರ್ಥವಾಗಿ ಕಟ್ಟಿಸಿದ ) ನೃಪತುಂಗ - ಕ್ರಿ.ಶ.878 ರಲ್ಲಿ ಮರಣ ಹೊಂದಿದ ಅಮೋಘವರ್ಷನ ನಂತರ ಈತನ ಮಗ - ಎರಡನೇ ಕೃಷ್ಣ ಅಧಿಕಾರಕ್ಕೆ ಬಂದನು ರಾಷ್ಟ್ರಕೂಟರ ಕೊನೆಯ ಅರಸ - ಎರಡನೇ ಕರ್ಕ ರಾಷ್ಟ್ರಕೂಟರ ಆಡಳಿತ ರಾಜ - ಆಡಳಿತದ ಕೇಂದ್ರ ಬಿಂದು ತುಂಗ ವರ್ಷ , ್ಕಾಲವರ್ಷ , ಶುಭತುಂಗ , ಜಗತ್ತುಂಗ - ರಾಜರ ಬಿರುದುಗಳು ರಾಜತ್ವ - ವಂಶ ಪಾರಂಪರ್ಯವಾಗಿತ್ತು ಮಂತ್ರಿಮಂಡಲ - ರಾಜನಿಗೆ ಆಡಳಿತದಲ್ಲಿ ಸಲಹೆ ನೀಡಲು ಅಸ್ತಿತ್ವದಲ್ಲಿತ್ತು ಮಂತ್ರಿ ಮಂಡಲದ ಮುಖ್ಯಸ್ಥ - ಪ್ರಧಾನ ಮಂತ್ರಿ ಮಹಾಸಂಧಿ ವಿಗ್ರಹಿ - ವಿದೇಶಾಂದ ವ್ಯಾವಹಾರಗಳ ಮಂತ್ರಿ ಅಮಾತ್ಯ - ಕಂದಾಯ ಮಂತ್ರಿ ಭಂಡಾರಿಕ - ಹಣಕಾಸು ವ್ಯವಾಹಾರಳ ಮಂತ್ರಿ ಸೇನೆಯ ಮುಖ್ಯ ಕಛೇರಿ - ರಾಜಧಾನಿಯಲ್ಲಿತ್ತು ಆದಾಯದ ಮೂಲ - ಭೂಕಂದಾಯ ಉದ್ರಂಗ , ಉಪರಿತ ,ಬಾಗಕರ - ಪ್ರಮುಖ ಕಂದಾಯಗಳು ಸಾಮಂತರು - ಕಪ್ಪ ಕಾಣಿಕೆ ಕೋಡಬೆಕಾಗಿತ್ತು ಪ್ತಾಂತ್ಯಾಡಳಿತ - ಪ್ರಾಂತ್ಯ , ಭುಕ್ತಿ , ವಿಷಯ ಹಾಗೂ ಗ್ರಾಮ ಪ್ರಾಂತ್ಯಗಳನ್ನು - ರಾಷ್ಟ್ರ ಅಥವಾ ಮಂಡಲ ಎಂದು ಕರೆಯಲಾಗುತ್ತಿತ್ತು ರಾಷ್ಟ್ರಪತಿ - ಪ್ರಾಂತ್ಯದ ಆಡಳಿತದ ಮುಖ್ಯಸ್ಥ ವಿಷಯಗಳು - ಪ್ರಾಂತ್ಯಗಳನ್ನು ವಿಷಯಗಳಾಗಿ ವಿಭಗಿಸಲ್ಪಟ್ಟತ್ತು ವಿಷಯದ ಮುಖ್ಯಸ್ಥ - ವಿಷಯಪತಿ ಭುಕ್ತಿ - ವಿಷಯಗಳನ್ನು ಭುಕ್ತಿಗಳಾಗಿ ವಿಭಾಗಿಸಲಾಗಿತ್ತು ಬೋಗಪತಿ - ಭುಕ್ತಿಯ ಮುಖ್ಯಸ್ಥ ಪಟ್ಟಣದ ಆಡಳಿತ - ಪಟ್ಟಣ ಶೆಟ್ಟಿಗಳು ನೋಡಿಕೊಳ್ಳುತ್ತಿದ್ದರು ಗ್ರಾಮ - ಆಡಳಿತದ ಕೊನೆಯ ಘಟಕ ಗ್ರಾಮಪತಿ ಅಥವಾ ಪ್ರಭುಗಾವುಂಡ - ಗ್ರಾಮದ ಮುಖ್ಯಸ್ಥ ಮಹಜನರು - ಗ್ರಾಮ ಸಭೆಯ ಸದಸ್ಯರು ರಾಷ್ಟ್ರಕೂಟರ ಸಾಮಾಜಿಕ ಜೀವನ ಸಮಾಜದಲ್ಲಿ ಪಿತೃ ಪ್ರಧಾನ ಕುಟುಂಬ ಅಶ್ತಿತ್ವದಲ್ಲಿತ್ತು ಕೀಳ್ಗುಂಟೆ ಮತ್ತು ವೇಳಾವಳಿ - ಸೇವಕರು , ಸೈನಿಕರು ,ಸ್ತ್ರೀಯರು ತಮ್ಮ ಮಾನ ಹಾಗೂ ಘನತೆಯ ಹಾಗೂ ಗ್ರಾಮದ ರಕ್ಷಣಿಗಾಗಿ ಮಾಡುತ್ತಿದ್ದ ಬಲಿದಾನ ರಾಷ್ಟ್ರಕೂಟರ ಆರ್ಥಿಕ ಜೀವನ ನೇಗಿಲು ವ್ಯವಸಾಯದ ಪ್ರಮುಖ ಉಪಕರಣವಾಗಿದ್ದು ಇದನ್ನು “ಮೇಟಿ” ಎಂದು ಕರೆಯುತ್ತಿದ್ದರು . ಕೃಷಿ -ಆರ್ಥಿಕ ಜೀವನದ ಬೆನ್ನೇಲುಬಾಗಿತ್ತು . ಭೂಮಿಯ ವಿಭಾಗಗಳು - ತರಿ , ಖುಷ್ಕಿ ಆದಾಯದ ಮೂಲ - ಭೂಕಂದಾಯವಾಗಿತ್ತು ಕಂದಾಯ ವಸೂಲಿ - ಉತ್ತನ್ನದ 1/6 ಭಾಗ ಪ್ರಮುಖ ವಾಣಿಜ್ಯ ಬೆಳೆ - ಹತ್ತಿಯಾಗಿತ್ತು ಕೈಗಾರಿಕಾ ಕೇಂದ್ರ - ಗುಜರಾತ್ , ಬಿಹಾರ್ ಹಾಗೂ ತೆಲಂಗಾಣದಲ್ಲಿತ್ತು ಮಾನ್ಯಖೇಟ - ಆಭರಣದ ಮಾರುಕಟ್ಟೆಯಾಗಿತ್ತು ವ್ಯಾಪಾರ ಸಂಪರ್ಕ - ಅರಬ್ ರಾಷ್ಟ್ರದೊಂದಿಗೆ ವಿದೇಶಿ ವ್ಯಾಪಾರ ಕೇಂದ್ರಗಳು - ಕಲ್ಯಾಣ , ಸೋಪಾರ , ಬ್ರೋಚ್. ತೊರಾಣ , ಥಾಣ ವ್ಯಾಪಾರಿ ವೃತ್ತಿ ಸಂಘ ಹೊಂದಿದ್ದವರು - ವೀರಬಣಜಿಗರು ಲಕ್ಷ್ಮೇಶ್ವರ - ನೆಯ್ಗೆಕಾರರ ನೆಯ್ಗೆ ಸಂಘ ಹೊಂದಿತ್ತು ನಾಣ್ಯಗಳು - ದ್ರಮ್ಮ , ಸುವರ್ಣ , ಗದ್ಯಾಣ , ಕಳಂಜು ಹಾಗೂ ಕಾಸು ರಾಷ್ಟ್ರಕೂಟರ ಸಾಂಸ್ಕೃತಿಕ ಕೊಡುಗೆಗಳು ಬಂಕಾಪುರ - ರಾಷ್ಟ್ರಕೂಟರ ಪ್ರಸಿದ್ದ ಜೈನಮತದ ಕೇಂದ್ರವಾಗಿತ್ತು ರಾಷ್ಟ್ರಕೂಟರು - ಸಂಸ್ಕೃತ ಹಾಗೂ ಕನ್ನಡ ಭಾಷೆಯಲ್ಲಿ ಶಿಕ್ಷಣ ನೀಡುತ್ತಿದ್ದರು ಬಿಜಾಪುರ ಜಿಲ್ಲೆಯ “ಸಾಲೋಟಗಿ ” - ಇವರ ಕಾಲದ ಪ್ರಸಿದ್ದ ವಿದ್ಯಾಕೇಂದ್ರ ಇವರ ಕಾಲದಲ್ಲಿ ರಚನೆಯಾದ ಸಾಹಿತ್ಯ ಕೃತಿಗಳು ತ್ರಿವಿಕ್ರಮ - ನಳಚಂಪು ಹಲಾಯುಧ - ಕವಿರಹಸ್ಯ ಅಕಲಂಕ - ಅಷ್ಟಸಹಸ್ರಿ ಅಮೋಘವರ್ಷ - ಪ್ರಶ್ನೋತ್ತರ ಮಾಲಿಕೆ ( ಸಂಸ್ಕೃತ ) ಹಾಗೂ ಕವಿರಾಜಮಾರ್ಗ ಜಿನಸೇನ - ಆದಿಪುರಾಣ , ಪಾರ್ಶ್ವಭುದಯ ಹಾಗೂ ಜಯದವಳ ಮಹಾವೀರಾಚಾರ್ಯ - ಗಣಿತ ಸಾರ ಸಂಗ್ರಹ ( ಗಮಿತ ಗ್ರಂಥ ) ಕನ್ನಡದ ಮೊಟ್ಟ ಮೊದಲ ಉಪಲಬ್ದ ಗ್ರಂಥ - ಕವಿರಾಜಮಾರ್ಗ ಕನ್ನಡದ ಆದಿಕವಿ - ಪಂಪ ಪಂಪ ಅರಿಕೇಸರಿಯ ಆಸ್ಥಾನ ಕವಿ ಪಂಪನ ಕೃತಿಗಳು - ವಿಕ್ರಮಾರ್ಜುನ ವಿಜಯ ಹಾಗೂ ಆದಿಪುರಾಣ ಪೊನ್ನ - ಮೂರನೇ ಕೃಷ್ಣನ ಆಸ್ಥಾನದ ಕವಿ ಕವಿಚಕ್ರವರ್ತಿ - ಪೊನ್ನನ ಬಿರುದು ಪೊನ್ನನ ಕೃತಿಗಳು - ಶಾಂತಿಪುರಾಣ , ಭುವನೈಕ್ಯ ರಾಮಭ್ಯುದಯ ಮತ್ತು ಜಿನಾಕ್ಷರ ಮಾಲೆ ( ಎಲ್ಲವೂ ಕನ್ನಡ ಕೃತಿಗಳು ) ಮೂರನೇ ಕೃಷ್ಣ ಪೊನ್ನನಿಗೆ ನೀಡಿದ ಬಿರುದು - ಉಭಯಕವಿ ಕಲೆ ಮತ್ತು ವಾಸ್ತು ಶಿಲ್ಪ ಒಂದನೇ ಕೃಷ್ಣ ನಿರ್ಮಿಸಿದ - ಎಲ್ಲೋರಾದ ಕೈಲಾಸನಾಥ ದೇವಾಲಯ ಇವರ ಕಾಲದ ಪ್ರಮುಖ ದೇವಾಲಯ ಎಲ್ಲೋರಾದ ಕೈಲಾಸ ದೇವಾಲಯದ ಶಿಲ್ಪಿ - ವಿಶ್ವಕರ್ಮ ಈ ದೇವಾಲಯ ಪ್ರಸ್ತುತ - ಮಹಾರಾಷ್ಟ್ರದ ಔರಂಗಬಾದ್ ಜಿಲ್ಲೆಯಲ್ಲಿದೆ ಎಲ್ಲೋರಾದ 30 ನೇ ಗುಹೆಯನ್ನು - ಛೋಟಾ ಕೈಲಾಸ ಎಂದು ಕರೆಯಲಾಗಿದೆ ಎಲಿಫೆಂಟಾ ದೇವಾಲಯ - ಬಾಂಬೆಯ ಬಳಿಯಿದೆ ಎಲಿಫೇಂಟಾದ ಮೊದಲ ಹೆಸರು - ಗೊರವಪುರಿ ಅಥವಾ ಗೋವಕಪುರಿ ಈ ದೇವಾಲಯವನ್ನು “ ಎಲಿಫೇಂಟಾ ” ಎಂದ ಕರೆದವರು - ಪೋರ್ಚುಗೀಸರು ರಾಷ್ಠ್ರಕೂಟರ ಕಾಲವನ್ನು - “ಕಾನೂಜ್ ಸಾಮ್ರಾಜ್ಯ ಕಾಲ ” ಎಂದು ಕರೆಯಲಾಗಿದೆ Extra Tips ರಾಷ್ಟ್ರಕೂಟರ ರಾಜ್ಯ ಲಾಂಛನ - ಗರುಡ ದಂತಿದುರ್ಗನ ತಂದೆಯ ಹೆಸರು - ಇಂದ್ರ ದಂತಿದುರ್ಗನ ಬಿರುದುಗಳು - ಮಹಾರಾಜಾಧಿ ಪರಮೇಶ್ವರ , ಪೃಥ್ವಿವಲ್ಲಭ ಒಂದನೇ ಕೃಷ್ಣನ ಬಿರುದುಗಳು - ಶುಭತುಂಗ , ಅಕಾಲವರ್ಷ ಎರಡನೇ ಗೋವಿಂದನ ಬಿರುದುಗಳು - ಜಗತ್ತುಂಗ , ಪ್ರಭೂತವರ್ಷ ಹಾಗೂ ಪ್ರತಾಪವ ಲೋಕ ಧೃವನ ಬಿರಿದುಗಳು - ಧಾರವರ್ಷ , ಕಲಿವಲ್ಲಭ ಹಾಗೂ ಶ್ರೀವಲ್ಲಭ ಮೂರನೇ ಗೋವಿಂದನ ಬಿರುದುಗಳು - ನರೇಂದ್ರ , ಜಗತ್ತುಂಗ , ಪ್ರಭೂತವರ್ಷ ಹಾಗೂ ಜನವಲ್ಲಭ ರಾಷ್ಟ್ರಕೂಟರ ಶಾಂತಿಪ್ರೀಯ ಅರಸ - ಅಮೋಘವರ್ಷನೃಪತುಂಗ “ಶಬ್ದಾನು ಶಾಸನ ” ಎಂಬ ಸಂಸ್ಕೃತ ವ್ಯಾಕರಣ ಗ್ರಂಥದ ಕರ್ತೃ - ಶಾಕ್ತಾಯನ ನೃಪತುಂಗನ ಆಸ್ಥಾನ ಕವಿ - ಶ್ರೀವಿಜಯ ಮಾನ್ಯಖೇಟ ಎಂಬ ಹೊಸ ರಾಜಧಾನಿಯ ನಿರ್ಮಾತೃ - ಅಮೋಘವರ್ಷ ನೃಪತುಂಗ ಕಂಚಿಕೊಂಡ ಎಂಬ ಬಿರುದು ಧರಿಸಿದ್ದ ರಾಜ - 3 ನೇ ಕೃಷ್ಣ ಕನ್ನಡದ ಮೊದಲ ಗಧ್ಯ ಕೃತಿ - ವಡ್ಡರಾಧನೆ ವಡ್ಡರಾಧನೆಯ ಕರ್ತೃ - ಶಿವಕೋಟಾಚಾರ್ಯ ಪ್ರಾಚೀನ ಕರ್ನಾಟಕದ ಎಲ್ಲೆಯನ್ನು ತಿಳಿಸುವ ಕನ್ನಡ ಕೃತಿ - ಕವಿರಾಜಮಾರ್ಗ ಒಂದನೇ ಕೃಷ್ಣನ ಮತ್ತೊಂದು ಹೆಸರು - ಕನ್ನರಸ ಬಿಲ್ಲಹ ನೃಪತುಂಗನ ಆಸ್ಥಾನಕ್ಕೆ ಬಂದಿದ್ದ ಅರಬ್ ಪ್ರವಾಸಿಗ - ಸುಲೇಮಾನ್ ಕನ್ನಡದ ಅತೀ ಪ್ರಾಚೀನ ಗ್ರಂಥ - ಕವಿರಾಜಮಾರ್ಗ ಉಭಯ ಕವಿ ಚಕ್ರವರ್ತಿ ಬಿರುದುಳ್ಳ ಕವಿ - ಪೊನ್ನ ರಾಷ್ಟ್ರಕೂಟರ ಕೊನೆಯ ಅರಸ - 2ನೇ ಕರ್ಕ ಗಣಿತ ಸಾರಸಂಗ್ರಹದ ಕರ್ತೃ - ಮಹಾವೀರಾಚಾರ್ಯರು ಕನ್ನಡದ ಮೊದಲ ುಪಲಬ್ದ ಕೃತಿ - ಕವಿರಾಜಮಾರ್ಗ ಚಾಲುಕ್ಯರ ನಂತರ ಅಧಿಕಾರಕ್ಕೆ ಬಂದವರು - ರಾಷ್ಠ್ರಕೂಟರು